ಅನುವಾದಕರು: ಆರಾಧ್ಯ ಎಸ್ ಆರ್ಈ ಅಪೂರ್ವ ಕೃತಿಯ ಪುಟಗಳಲ್ಲಿ, ವಿಶ್ವದಾದ್ಯಂತ ಪುಸ್ತಕಪ್ರಿಯರಲ್ಲಿ ರೋಮಾಂಚನ ಸೃಷ್ಟಿಸಿದ ದಿ ಮಾಂಕ್ ಹೂ ಸೋಲ್ಡ್ ಹಿಸ್ ಫೆರಾರಿ ಕೃತಿಯ ಪ್ರಖ್ಯಾತ ಲೇಖಕ ಹಾಗೂ ಅಂತಾರಾಷ್ಟ್ರೀಯ ಖ್ಯಾತಿಯ ನಾಯಕತ್ವ ಗುರು ರಾಬಿನ್ ಶರ್ಮಾ ನಿಮಗೆ ನಿಮ್ಮ ಮಗುವಿನ ನಿಸರ್ಗದತ್ತ ನಾಯಕತ್ವ ಸಾಮರ್ಥ್ಯವನ್ನು ಬಿಡುಗಡೆಗೊಳಿಸುವ ಸರಲ ಆದರೆ ಅಷ್ಟೇ ಪರಿಣಾಮಕಾರಿಯಾದ ವ್ಯವಸ್ಥೆಯನ್ನು ಅನಾವರನಗೊಳಿಸುವ ಜೊತೆಗೆ ನಿಮಗಾಗಿಯೂ ನೀವು ಹೆಚ್ಚು ಸಮೃದ್ಧ ಮತ್ತು ಸಾರ್ಥಕ ಜೀವನವನ್ನು ಹೇಗೆ ಸೃಷ್ಟಿಸಿಕೊಳ್ಳಬಹುದೆಂಬುದನ್ನು ನಿರೂಪಿಸಿದ್ದಾರೆ. ಅಗಾಧವಾದ ಒಳನೋಟ ಮತ್ತು ಹೃದಯಸ್ಪರ್ಶಿ ಉತ್ಸಾಹದಿಂದ ಅವರು ನಿಮಗೆ ಕುಟುಂಬ ನಾಯಕನ 5 ಪ್ರಾವೀಣ್ಯತೆಗಳನ್ನು ಪ್ರಾಯೋಗಿಕ ಪಾಠಗಳ ಸಹಿತವಾಗಿ ಸುಲಭವಾಗಿ ಅರ್ಥವಾಗುವಂತೆ ಬೋಧಿಸಿದ್ದಾರೆ...
South Vs North ಪುಸ್ತಕದ ಅನುವಾದದ ಪ್ರಕಾಶನ ಕರ್ನಾಟಕ ಮತ್ತು ಕನ್ನಡ ಓದುಗರಿಗೆ ಏಕೆ ಮುಖ್ಯ?ಸಂವಿಧಾನ ಜಾರಿಗೆ ಬಂದ ನಂತರ ಒಕ್ಕೂಟ ಸರ್ಕಾರ (ಕೇಂದ್ರ ಸರ್ಕಾರ) ಮತ್ತು ರಾಜ್ಯಗಳ ನಡುವೆ ಆರ್ಥಿಕ ಸಂಪನ್ಮೂಲಗಳ ನ್ನು ಹಂಚಿಕೊಳ್ಳಲು ಆರ್ಥಿಕ ಆಯೋಗ ರಚನೆ ಮಾಡಿಕೊಂಡಿದ್ದೇವೆ. ಸ್ವಾತಂತ್ರ್ಯ ನಂತರದಿಂದಲೂ ಆರ್ಥಿಕ ಆಯೋಗ ಉತ್ತರ ಭಾರತದ ರಾಜ್ಯಗಳಿಗೆ ಹೆಚ್ಚಿನ ಆರ್ಥಿಕ ಸಂಪನ್ಮೂಲವನ್ನು ಒದಗಿಸುತ್ತಲೇ ಬಂದಿದೆ..ಸ್ವಾತಂತ್ರ್ಯ ನಂತರ ಇಂಡಿಯಾದ ಪ್ರತಿಯೊಂದು ರಾಜ್ಯಗಳಲ್ಲೂ ಒಂದೇ ರೀತಿಯ ಶಾಸಕಾಂಗ ಮತ್ತು ಕಾರ್ಯಾಂಗದ ವ್ಯವಸ್ಥೆ ಇದೆ. ರಾಜಕೀಯ ಮತ್ತು ಆರ್ಥಿಕ ಪರಿಸ್ಥಿತಿ ಒಂದೇ ರೀತಿಯಲ್ಲಿ ಇದ್ದರು ಕಳೆದ ಎಪ್ಪತ್ತೈದು ವರುಷಗಳಲ್ಲಿ ದಕ್ಷಿಣದ ರಾಜ್ಯಗಳು ಯುರೋಪ್ ನ ಅಭಿವೃದ್ಧಿ ಹೊಂದಿದ ದೇಶಗಳಂತೆ ತಮ್ಮ ಮಾನವ ಸಂಪನ್ಮೂಲ ಅಭಿವೃದ್ಧಿ ಸಾಧಿಸಿತು. ಆದರೆ ಉತ್ತರದ ರಾಜ್ಯಗಳು ಕಳೆದ ಎಪ್ಪತ್ತೈದು ವರುಷಗಳಲ್ಲಿ ಬಡ ರಾಜ್ಯಗಳಾಗಿಯೇ ಉಳಿದವು. ಈ ಪರಿಸ್ಥಿತಿ ಏಕೆ ಉಂಟಾಯಿತು ಅನ್ನುವುದರ ಬಗ್ಗೆ ಈ ಪುಸ್ತಕ ಧೀರ್ಘವಾಗಿ ಚರ್ಚಿಸುತ್ತದೆ.ಈ ಚರ್ಚೆಯ ಹಿನ್ನೆಲೆಯಲ್ಲಿ ಈ ಪುಸ್ತಕ ಸೌತ್ ಇಂಡಿಯಾ ವನ್ನು ನಾರ್ತ್ ಇಂಡಿಯಾ ಜೊತೆಗೆ ಶಿಕ್ಷಣ, ಆರೋಗ್ಯ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿಗಳ ಹೋಲಿಕೆ ಮಾಡಿ ಸೌತ್ ಇಂಡಿಯಾ ನಾರ್ತ್ ಇಂಡಿಯಾ ಗೆ ಹೋಲಿಸಿದರೆ ಯಾವ ರೀತಿಯಲ್ಲಿ ಅಭಿವೃದ್ಧಿ ಹೊಂದಿದೆ ಅನ್ನುವುದನ್ನು ಅಂಕಿ ಅಂಶಗಳ ಸಹಿತ ಚರ್ಚಿಸುತ್ತದೆ. ಸೌತ್ ಇಂಡಿಯಾದ ಅಭಿವೃದ್ಧಿ ಚಕ್ರವನ್ನು ಇನ್ನೂ ಚೆನ್ನಾಗಿ ಮುಂದುವರೆಸಿಕೊಂಡು ಹೋಗಬೇಕು ಅಂದರೆ ಒಕ್ಕೂಟ ಸರ್ಕಾರದಿಂದ ಸೌತ್ ಇಂಡಿಯಾ ರಾಜ್ಯಗಳಿಗೆ ಬರಬೇಕಾದ ಆರ್ಥಿಕ ಪಾಲು ಬಹಳ ಮುಖ್ಯವಾದದ್ದು. ಆದರೆ ಹತ್ತನೇ ಆರ್ಥಿಕ ಆಯೋಗದಿಂದ ಹಿಡಿದು ಹದಿನೈದನೇ ಆರ್ಥಿಕ ಆಯೋಗದ ತನಕ ಸೌತ್ ಇಂಡಿಯಾ ರಾಜ್ಯಗಳಿಗೆ ಹೆಚ್ಚಿನ ಆರ್ಥಿಕ ಅನ್ಯಾಯ ಆಗುತ್ತಿದೆ. ಆದರೆ ಹೆಚ್ಚಿನ ಆರ್ಥಿಕ ನೆರವು ಪಡೆದ ನಾರ್ತ್ ಇಂಡಿಯಾ ರಾಜ್ಯಗಳು ದಿನೇ ದಿನೇ ಇನ್ನೂ ಹಿಂದೆ ಉಳಿಯುತ್ತಿವೇ. ಇದರಿಂದ ಸೌತ್ ಇಂಡಿಯಾ ರಾಜ್ಯಗಳು ಹೆಚ್ಚಿನ ತೆರಿಗೆ ಪಾಲನ್ನು ಒಕ್ಕೂಟ ಸರ್ಕಾರಕ್ಕೆ ಕೊಟ್ಟರು ವಾಪಸ್ ನಮ್ಮ ಪಾಲಿನ ತೆರಿಗೆ ಬರದ ಕಾರಣದಿಂದ ಸೌತ್ ಇಂಡಿಯಾ ರಾಜ್ಯಗಳ ಅಭಿವೃದ್ಧಿ ಕೂಡ ಕುಂಠಿತಗೊಳ್ಳುತ್ತಿದೆ. ಇಡೀ ನಾರ್ತ್ ಇಂಡಿಯಾ ವನ್ನು ಸೌತ್ ಇಂಡಿಯಾ ಸಾಕುತ್ತಿರುವುದರಿಂದ ನಾವುಗಳು ಕೂಡ ದಿನೇ ದಿನೇ ಬಡ ರಾಜ್ಯಗಳಾಗಿ ಬದಲಾಗುತ್ತಿದ್ದೇವೆ.ಈ ಪುಸ್ತಕದಲ್ಲಿ ಯಾವ ರೀತಿಯಲ್ಲಿ ಒಕ್ಕೂಟ ಸರ್ಕಾರದಿಂದ ಸೌತ್ ಇಂಡಿಯಾ ರಾಜ್ಯಗಳಿಗೆ ತೆರಿಗೆ ಹಂಚಿಕೆ ವಿಚಾರದಲ್ಲಿ ಕಳೆದ ಇಪ್ಪತ್ತೈದು ವರ್ಷಗಳಿಂದ ಅನ್ಯಾಯ ಆಗುತ್ತಿದೆ ಅನ್ನುವುದನ್ನು ಚರ್ಚಿಸಲಾಗಿದೆ. ಅದರಲ್ಲೂ 15 ನೇ ಆರ್ಥಿಕ ಆಯೋಗದಿಂದ ಸೌತ್ ಇಂಡಿಯಾ ರಾಜ್ಯಗಳಿಗೆ ಆಗುತ್ತಿರುವ ಆರ್ಥಿಕ ಅನ್ಯಾಯವನ್ನು ಅಂಕಿ ಅಂಶಗಳ ಸಹಿತ ಚರ್ಚಿಸುತ್ತದೆ.ಪುಸ್ತಕದ ಕೊನೆಯಲ್ಲಿ ಸೌತ್ ಇಂಡಿಯಾದ ಜನರು ಈ ಅನ್ಯಾಯವನ್ನು ಅರ್ಥ ಮಾಡಿಕೊಂಡು ಉತ್ತರದ ಬಡ ರಾಜ್ಯಗಳಿಗೂ ಹೆಚ್ಚಿನ ಅನ್ಯಾಯ ಆಗದಂತೆ ಹೇಗೆ ತಮ್ಮ ಪಾಲಿನ ತೆರಿಗೆ ಪಡೆದು ಅಭಿವೃದ್ಧಿ ಹೊಂದಬಹುದು ಅನ್ನುವುದನ್ನು ಚರ್ಚಿಸುತ್ತದೆ. ಇದರ ಜೊತೆಗೆ ಒಕ್ಕೂಟ ವ್ಯವಸ್ಥೆಯನ್ನು ಹೇಗೆ ಸದೃಢಗೊಳಿಸಿಕೊಳ್ಳುವುದು ಮತ್ತು ಈಗಿನ ಕೇಂದ್ರಿಕರಣದ ರಾಜಕಾರಣವನ್ನು ಯಾವ ರೀತಿಯಲ್ಲಿ ವಿಕೇಂದ್ರಿಕರಣ ರಾಜಕೀಯ ವ್ಯವಸ್ಥೆಯನ್ನಾಗಿ ಪರಿವರ್ತನೆ ಮಾಡಿ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವುದು ಅನ್ನುವುದರ ಬಗ್ಗೆ ಬಹಳ ಆಸಕ್ತಿದಾಯಕವಾದ ಐಡಿಯಾವನ್ನು ಈ ಪುಸ್ತಕ ಓದುಗರಿಗೆ ಪರಿಚಯಿಸುತ್ತದೆ.ಈ ಪುಸ್ತಕದ ಕನ್ನಡ ಅನುವಾದ ಏಕೆ ಮುಖ್ಯ ಅಂದರೆ, ಬಹಳ ಸರಳವಾಗಿ ಅಂಕಿ ಅಂಶಗಳ ಆಧಾರದಲ್ಲಿ ದಕ್ಷಿಣ ರಾಜ್ಯಗಳಿಗೆ ಒಕ್ಕೂಟ ಸರ್ಕಾರದಿಂದ ಆಗುತ್ತಿರುವ ಆರ್ಥಿಕ ಅನ್ಯಾಯವನ್ನು ಅರ್ಥ ಮಾಡಿಕೊಳ್ಳಲು ಅನುಕೂಲ ಆಗುತ್ತದೆ. ಒಮ್ಮೆ ಕನ್ನಡಿಗರಿಗೆ ಈ ಪುಸ್ತಕದ ಮುಕಾಂತರ ಆರ್ಥಿಕ ಅನ್ಯಾಯದ ಅರಿವು ಮೂಡಿದರೆ ಮುಂದಿನ ದಿನಗಳಲ್ಲಿ ದಕ್ಷಿಣ ರಾಜ್ಯಗಳ ಜನರಲ್ಲಿ ರಾಜಕೀಯ ಅರಿವು ಮೂಡಿ ನಮ್ಮ ತೆರಿಗೆಯ ಪಾಲನ್ನು ನಾವುಗಳು ಪಡೆದು ಅಭಿವೃದ್ಧಿ ಹೊಂದಿದ ರಾಜ್ಯಗಳಾಗಿ ಹೊರಹೊಮ್ಮಲು ಸಾಧ್ಯವಾಗುತ್ತದೆ...
ಅನುವಾದಕರು: ಹೇಮಾದೇವಿ ಬಿ ಎನ್ನೀನು ಹುಟ್ಟಿದ ಸಂದರ್ಭದಲ್ಲಿ ಇಡೀ ಲೋಕ ಸಂತೋಷಪಟ್ಟಗ ನೀನು ಅಳುತ್ತಿದ್ದೆ. ನೀನು ಸಂತೋಷದಿಂದ ಸಾಯುವಾಗ ಇಡೀ ಲೋಕ ಅಳುವಂತಹ ಬದುಕನ್ನು ನೀನು ಬದುಕು.” ಈ ರನ್ನದಂತಹ ನುಡಿಗಟ್ಟು ನಿಮ್ಮ ಅಂತರಾಳದ ಭಾವತಂತಿಯನ್ನು ಮೀಟುತ್ತಿದೆಯೇ? ನೀವು ಅರ್ಹರೆಂದು ತಿಳಿದಿರುವ ಅರ್ಥಪೂರ್ಣ, ನೆಮ್ಮದಿ ಮತ್ತು ಸಂತೋಷದ ಜೀವನ ನಡೆಸುವ ಅವಕಾಶ ತಪ್ಪಿ ಹೋಗುವಷ್ಟರಮಟ್ಟಿಗೆ ತೀವ್ರಗತಿಯಲ್ಲಿ ಜೀವನ ಜಾರಿ ಹೋಗುತ್ತಿದೆಯೆಂದು ನಿಮಗೆ ಅನಿಸುತ್ತಿದೆಯೇ? ಹಾಗಿದ್ದಲ್ಲಿ, ಸಹಸ್ರಾರು ಜನರ ಜೀವನವನ್ನು ಪರಿವರ್ತನೆ ಮಾಡಿದ ದಿ ಮಾಂಕ್ ಹು ಸೋಲ್ಡ್ ಹಿಸ್ ಫೆರಾರಿ ಸರಣಿಯ ಪುಸ್ತಕಗಳ ಲೇಖಕರಾದ, ನಾಯಕತ್ವದ ಗುರು ರಾಬಿನ್ ಶರ್ಮ ಅವರ ಆ ವೈಶಿಷ್ಟ್ಯಪೂರ್ಣ ಪುಸ್ತಕ ನಿಮ್ಮನ್ನು ಉಜ್ವಲವಾದ ನವೀನ ರೀತಿಯ ಜೀವನದೆಡೆಗೆ ಕೊಂಡೊಯ್ಯುವ ದಾರಿದೀಪವಾಗುವುದು. ಓದಲು ಸುಲಭವಾದರೂ ವಿವೇಕ ಪೂರ್ಣವಾದ ಈ ಕೈಪಿಡಿಯಲ್ಲಿ ಒತ್ತಡ ಮತ್ತು ಚಿಂತೆಗಳನ್ನು ಹೊಡೆದೋಡಿಸುವ, ಅಷ್ಟಾಗಿ ಹೆಚ್ಚಿನ ಜನರಿಗೆ ತಿಳಿದಿರದ ವಿಧಾನ ಕ್ರಮದಿಂದ ಹಿಡಿದು, ಬಹುಕಾಲ ಉಳಿಯುವ ಕೊಡುಗೆಯನ್ನು ಸೃಷ್ಟಿಸುತ್ತ ನಿಮ್ಮ ಜೀವನ ಪಯಣವನ್ನು ಸಂತಸದಿಂದ ಸಾಗಿಸಬಹುದಾದ ಒಂದು ಸತ್ವಪೂರ್ಣಹಾದಿಯವರೆಗೆ, ಜೀವನದ ಅತ್ಯಂತ ಸಂಕೀರ್ಣ ಸಮಸ್ಯೆಗಳಿಗೆ ೧೦೧ ಸರಳ ಪರಿಹಾರಗಳನ್ನು ರಾಬಿನ್ ಶರ್ಮ ನೀಡಿದ್ದಾರೆ...
ಪ್ರಕಾಶಕರು : ಜೈಕೊ ಪಬ್ಲಿಷಿಂಗ್ ಹೌಸ್ಜೀವನದಲ್ಲಿ ಧೈರ್ಯ, ಸಂತೋಷ, ಸಮತೋಲ, ಸಮೃದ್ಧಿಗಳನ್ನು ಸಾಧಿಸಲು ಅಗತ್ಯವಾಡ ವ್ಯವಸ್ಥಿತ ಮಾರ್ಗವನ್ನು ಈ ಸ್ಪೂರ್ತಿದಾಯಕ ಕೃತಿ ತೋರುತ್ತದೆ. ಅದ್ಭುತ ಕೌಶಲದಿಂದ ಕೂಡಿದ ದೃಷ್ಟಾಂತ ಕಥೆಯಿದು. ‘ಫೆರಾರಿ ಮಾರಿದ ಫಕೀರ’ - ಬದುಕಿನ ಸಮತೋಲ ಕೆಡಿಸಿಕೊಂಡು, ಆಧ್ಯಾತ್ಮಿಕ ಬಿಕ್ಕಟ್ಟನ್ನು ಎದುರಿಸಿದ ಪ್ರತಿಭಾವಂತ ಲಾಯರ್ ಒಬ್ಬನ ಅಸಾಧಾರನ ಕಥೆ. ಜೀವನವನ್ನೇ ಪರಿವರ್ತನೆ ಮಾಡುವ ಪ್ರಾಚೀನ ಸಂಸ್ಕೃತಿಯ ಕೇಂದ್ರಕ್ಕೆ ಯಾತ್ರೆ ಮಾಡಿ, ಅಲ್ಲಿ, ಆನಂದದಾಯಕ ಯೋಚನೆ, ಜೀವನದ ಪರಮಗುರಿಯ ಸಾಧನೆ, ಸಂಯಮ, ಧೈರ್ಯ ಹಾಗೂ ಶಿಸ್ತನ್ನು ಮೈಗೂಡಿಸಿಕೊಳ್ಳುವುದು, ಸಮಯದ ಮಹತ್ವವನ್ನು ಅರಿಯುವುದು ಮತ್ತು ಸಂಬಂಧಗಳನ್ನು ಪೋಷಿಸುವುದನ್ನು ಮತ್ತು ಪ್ರತಿದಿನದಲ್ಲೂ ಪರಿಪೂರ್ಣವಾಗಿ ಬಾಳುವುದನ್ನೂ ಕಲಿಸುವ ಶಕ್ತಿಶಾಲಿ, ಪ್ರಾಯೋಗಿಕ ವಿವೇಕಯುತ ಪಾಠಗಳನ್ನು ಕಲಿಸಿಕೊಡುತ್ತದೆ...
ಜವಾಹರಲಾಲ ನೆಹರೂ ಮಗಳು ಇಂದಿರೆಗೆ ಬರೆದ ಜಗತ್ತಿನ ಪ್ರಾಚೀನ ಕಾಲದ ಸಂಕ್ಷಿಪ್ತ ವೃತ್ತಾಂತಗಳು.ಇಂದಿರಾ ಗಾಂಧಿ ಹತ್ತು ವರ್ಷದ ಹುಡುಗಿಯಾಗಿದ್ದಾಗ ತನ್ನ ಬೇಸಿಗೆ ರಜೆಯನ್ನು ಮಸೂರಿಯಲ್ಲಿ ಕಳೆಯುತ್ತಿದ್ದರೆ, ಆಕೆಯ ತಂದೆ ನೆಹರೂ ಅಲಹಾಬಾದಿನಲ್ಲಿ ತಮ್ಮ ಕೆಲಸದಲ್ಲಿ ವ್ಯಸ್ತವಾಗಿದ್ದರು. ಆ ಬೇಸಿಗೆಯ ದಿನಗಳಲ್ಲಿ ನೆಹರೂ ಆಕೆಗೆ ಭೂಮಿಯ ಹುಟ್ಟು, ಮನುಕುಲ ಮತ್ತು ಜೀವ ವಿಕಸನದ ಕುರಿತು ಹಾಗೂ ನಾಗರೀಕತೆ ಮತ್ತು ಸಮಾಜಗಳ ಬೆಳವಣಿಗೆಯ ಕತೆಯನ್ನು ಸರಣಿ ಪತ್ರಗಳ ರೂಪದಲ್ಲಿ ಬರೆದರು.1928ರಲ್ಲಿ ಬರೆದ ಈ ಪತ್ರಗಳು ಈ ಕಾಲಕ್ಕೂ ಸ್ಪಂದಿಸುವಷ್ಟು ತಾಜಾತನದಿಂದ ಕೂಡಿದೆ. ಪ್ರಕೃತಿ ಮತ್ತು ಮನುಷ್ಯರ ವಿಕಸನದ ಕತೆಗಳು ನೆಹರೂವಿಗೆ ಯಾವುದೇ ಕತೆ ಕಾದಂಬರಿಗಳಿಗಿಂತ ಹೆಚ್ಚು ಆಸಕ್ತಿಪೂರ್ಣವಾಗಿತ್ತೆಂಬುದನ್ನು ಈ ಪತ್ರಗಳಲ್ಲಿ ನಾವು ಕಾಣಬಹುದು...
‘ಮಹಾನ್ ಮಾರ್ಗದರ್ಶಿ’ಯು ಅತ್ಯಂತ ಶಕ್ತಿಶಾಲಿಯೂ, ಸ್ಫೂರ್ತಿದಾಯಕವೂ ಆಗಿರುವ ಕೃತಿಯಾಗಿದ್ದು ನಿಮ್ಮ ವೈಯಕ್ತಿಕ ಹಾಗೂ ವೃತ್ತಿಜೀವನದಲ್ಲಿ ಜಾಗತಿಕ ಮಟ್ಟದ ಸಾಧನೆ ಮಾಡಲು ಪ್ರೇರೇಪಿಸುತ್ತದೆ. ನಿಮ್ಮ ಜೀವನದ ಸುಪ್ತಶಕ್ತಿಯ ಪರಾಕಾಷ್ಠೆಯನ್ನು ಸಾಧಿಸಿ, ಅಸಾಧಾರಣ ಗುಣಮಟ್ಟದ ಜೀವನ ನಡೆಸಲು ನೆರವಾಗುವ ಸಿದ್ಧ ಸೂತ್ರಗಳನ್ನು ‘ಮಹಾನ್ ಮಾರ್ಗದರ್ಶಿ’ ಒಳಗೊಂಡಿದೆ. ‘ಮಹಾನ್ ಮಾರ್ಗದರ್ಶಿ’ಯ ಪುಟಗಳಲ್ಲಿರುವ ‘ಗಾಂಧಿಯೊಡನೆ ಕಾಫಿ ಕುಡಿಯಿರಿ’, ‘ಸೂಪರ್ ಸ್ಟಾರ್ನಂತೆ ಮಾತಾಡಿ’, ‘ಪ್ರಥಮದರ್ಜೆಗೇ ಬದ್ಧರಾಗಿ’, ‘ಸಮಸ್ಯೆಗಳು ಪ್ರತಿಭೆಯನ್ನು ತೋರಿಸುತ್ತವೆ’, ‘ಹುದ್ದೆಯಿಲ್ಲದ ನಾಯಕತ್ವ’, ‘ಹೆಚ್ಚು ಅನುಭವವುಳ್ಳವರು ಹೆಚ್ಚು ಗೆಲ್ಲುತ್ತಾರೆ’ ಮುಂತಾದ ಅಸಾಧಾರಣ ಸಲಹೆಗಳು ನಿಮ್ಮಲ್ಲಿ ಶಕ್ತಿ ಸಂಚಾರ ಮಾಡಿಸಿ ಕ್ರಿಯಾಶೀಲತೆಗೆ ನೂಕುತ್ತವೆ. ಈ ಪುಸ್ತಕವು ನಿಮ್ಮ ದಿನಗಳಿಗೆ ಹೊಸ ಉಸಿರನ್ನು ನೀಡಿ, ನೀವು ಓರ್ವ ಮನುಷ್ಯರಾಗಿ ಭರ್ಜರಿ ಆಟವಾಡುವಂತೆ ಪ್ರೇರೇಪಿಸುತ್ತದೆ...
‘ಮಹಾನ್ ಮಾರ್ಗದರ್ಶಿ’ಯು ಅತ್ಯಂತ ಶಕ್ತಿಶಾಲಿಯೂ, ಸ್ಫೂರ್ತಿದಾಯಕವೂ ಆಗಿರುವ ಕೃತಿಯಾಗಿದ್ದು ನಿಮ್ಮ ವೈಯಕ್ತಿಕ ಹಾಗೂ ವೃತ್ತಿಜೀವನದಲ್ಲಿ ಜಾಗತಿಕ ಮಟ್ಟದ ಸಾಧನೆ ಮಾಡಲು ಪ್ರೇರೇಪಿಸುತ್ತದೆ. ನಿಮ್ಮ ಜೀವನದ ಸುಪ್ತಶಕ್ತಿಯ ಪರಾಕಾಷ್ಠೆಯನ್ನು ಸಾಧಿಸಿ, ಅಸಾಧಾರಣ ಗುಣಮಟ್ಟದ ಜೀವನ ನಡೆಸಲು ನೆರವಾಗುವ ಸಿದ್ಧ ಸೂತ್ರಗಳನ್ನು ‘ಮಹಾನ್ ಮಾರ್ಗದರ್ಶಿ’ ಒಳಗೊಂಡಿದೆ. ‘ಮಹಾನ್ ಮಾರ್ಗದರ್ಶಿ’ಯ ಪುಟಗಳಲ್ಲಿರುವ ‘ಗಾಂಧಿಯೊಡನೆ ಕಾಫಿ ಕುಡಿಯಿರಿ’, ‘ಸೂಪರ್ ಸ್ಟಾರ್ನಂತೆ ಮಾತಾಡಿ’, ‘ಪ್ರಥಮದರ್ಜೆಗೇ ಬದ್ಧರಾಗಿ’, ‘ಸಮಸ್ಯೆಗಳು ಪ್ರತಿಭೆಯನ್ನು ತೋರಿಸುತ್ತವೆ’, ‘ಹುದ್ದೆಯಿಲ್ಲದ ನಾಯಕತ್ವ’, ‘ಹೆಚ್ಚು ಅನುಭವವುಳ್ಳವರು ಹೆಚ್ಚು ಗೆಲ್ಲುತ್ತಾರೆ’ ಮುಂತಾದ ಅಸಾಧಾರಣ ಸಲಹೆಗಳು ನಿಮ್ಮಲ್ಲಿ ಶಕ್ತಿ ಸಂಚಾರ ಮಾಡಿಸಿ ಕ್ರಿಯಾಶೀಲತೆಗೆ ನೂಕುತ್ತವೆ. ಈ ಪುಸ್ತಕವು ನಿಮ್ಮ ದಿನಗಳಿಗೆ ಹೊಸ ಉಸಿರನ್ನು ನೀಡಿ, ನೀವು ಓರ್ವ ಮನುಷ್ಯರಾಗಿ ಭರ್ಜರಿ ಆಟವಾಡುವಂತೆ ಪ್ರೇರೇಪಿಸುತ್ತದೆ...
ಆರ್. ಕೆ. ನಾರಾಯಣ್ ಅವರ ಬರಹವೆಂದರೆ ದಕ್ಷಿಣ ಭಾರತದ ಮಧ್ಯಮವರ್ಗದ ಜನರಿಗೆ ಒಂದು ರಸದೌತಣವಿದ್ದಂತೆ. ಅವರ ಕಲ್ಪನೆಯ ಮಾಲ್ಗುಡಿ ನಮ್ಮ ಮನೋರಾಜ್ಯದ ಆಶೋತ್ತರಗಳನ್ನೆಲ್ಲ ಸಾಕರಗೊಳಿಸುವ ಯಶಸ್ವೀ ಪ್ರಯತ್ನ. ಮಾಲ್ಗುಡಿಯ ವರ್ಣಮಯ ಜೀವನಸಿರಿಗೆ ಮೂವತ್ತೆರಡು ಸಣ್ಣ ಕಥೆಗಳನ್ನು ಸೇರಿಸುವ ಮೂಲಕ ಅದರ ರುಚಿವೈವಿಧ್ಯವನ್ನು ‘ಮಾಲ್ಗುಡಿ ದಿನಗಳು‘ ಇನ್ನೂ ಹೆಚ್ಚಿಸಿದೆಯೆಂದರೆ ಅತಿಶಯೋಕ್ತಿಯಾಗಲಾರದು. ನಿರ್ಭಾವುಕತೆಯೊಂದಿಗೆ ಜೀವಕಾರುಣ್ಯವನ್ನೂ ಸೇರಿಸಿ ಎರಕ ಹೊಯ್ದಂತಿರುವ ಆರ್. ಕೆ. ನಾರಾಯಣ್ ಅವರ ದೃಷ್ಟಿಯಿಂದ ಭಾರತೀಯ ಸಮಾಜದ ಯಾವ ಅಂಶವೂ ತಪ್ಪಿಸಿಕೊಂಡಿಲ್ಲ. ವ್ಯಾಪಾರಿಗಳು, ಭಿಕ್ಷುಕರು, ದನಗಾಹಿಗಳು, ಗೋಸಾಯಿಗಳು, ಶಿಕ್ಷಕರು, ಕಳ್ಳಕೊರಮರು-ಎಲ್ಲ ರೀತಿಯ ಪಾತ್ರಗಳೂ ಮೂರ್ತೀಭವಿಸಿ ಬಂದು ನಾರಾಯಣ್ ಅವರ ಸಾಹಿತ್ಯದ ನಳಪಾಕಕ್ಕೆ ಮಾನವ ಜೀವನಾನುಭವದ ತಮ್ಮ ತಮ್ಮ ಭಾಗಗಳನ್ನು ತಂದು ಸುರಿದು ಅನುಪಮ ಸ್ವಾದವನ್ನುಂಟುಮಾಡುತ್ತಾರೆ...
ಡಾ. ಯಂಡಮೂರಿ ವೀರೇಂದ್ರನಾಥ್ ಏನು ಬರೆದರೂ ಆಸಕ್ತಿಕರವಾಗಿ ಬರೆಯುತ್ತಾರೆ. ಒಂದು ಇಂಟರ್ವ್ಯೂನಲ್ಲಿ ಪತ್ರಕರ್ತರೊಬ್ಬರು, ‘ನೀವು ನಾಟಕ, ಕಥೆ, ಕಾದಂಬರಿ ಮತ್ತು ವ್ಯಕ್ತಿತ್ವ ವಿಕಸನದ ಪುಸ್ತಕಗಳನ್ನು ಬರೆದಿದ್ದೀರಿ. ಇವೆಲ್ಲಕ್ಕೂ ಇರುವ ಕಾಮನ್ ಫ್ಯಾಕ್ಟರ್ ಯಾವುದು?’ ಎಂದು ಕೇಳಿದಾಗ, “ರೀಡಬಿಲಿಟಿ” ಎಂದು ಉತ್ತರಿಸಿದ್ದರು ಯಂಡಮೂರಿ.ಹೌದು, ಅವರ ಪುಸ್ತಕಗಳ ಪ್ರಕಾರ ಯಾವುದೇ ಆದರೂ ಸುಲಭವಾಗಿ ಓದಿಸಿಕೊಂಡು ಹೋಗುತ್ತವೆ.ಪ್ರಸ್ತುತ ಪುಸ್ತಕದಲ್ಲಿ ಅವರ ಅನುಭವಗಳು, ಅವರ ಆಲೋಚನೆಗಳು ಮುಂತಾದುವನ್ನು ಬಹಳ ಸ್ವಾರಸ್ಯಕರವಾಗಿ ವಿವರಿಸಿದ್ದಾರೆ. ಎಲ್ಲರಿಗೂ ಇಷ್ಟವಾಗುವ ಕಥಾರೂಪದಲ್ಲಿಯೂ ಹೇಳಿದ್ದಾರೆ.ನಮ್ಮ ಸ್ವಂತ ವಿಕಾಸದಿಂದ ಹಿಡಿದು ದೇಶದ ಒಳಿತಿನವರೆಗೂ ವೈವಿಧ್ಯಮಯ ವಿಷಯಗಳು ಈ ಹೊತ್ತಗೆಯಲ್ಲಿ ಇವೆ.ಓದುಗರಿಗೆ ಅವರ ಜೀವನದಲ್ಲಿ ವಿಜಯ ಸಿಗಲೆಂದು ಆಶಿಸುವ..
ಲೇಖಕರು : ರ್ಯಾಂಡಿ ಪಾಶ್, Randy Pausch , ಜೆಫ್ರಿ ಜಸ್ಲೊ, Jeffrey Zaslowಅನುವಾದಕರು: ಉಮೇಶ್ ಎಸ್, Umesh S‘ದಿ ಲಾಸ್ಟ್ ಲೆಕ್ಚರ್’ ಕೇವಲ ವ್ಯಕ್ತಿಯೊಬ್ಬನ ಕಥೆಯಲ್ಲ. ಬದುಕಿನ ದಿನಚರಿಯಲ್ಲಿ ಕೊನೆಯ ಪುಟವನ್ನು ಬರೆಯುತ್ತಿರುವ ವಿಜ್ಞಾನಿಯೊಬ್ಬನ ಭಾವನಾತ್ಮಕ ಅನುಭವಗಳ ಸಂಪುಟ. ಯಾವುದಾದರೊಂದು ರಂಗದಲ್ಲಿ ದೊಡ್ಡ ಹೆಸರು ಮಾಡಿದ ವ್ಯಕ್ತಿಯೊಬ್ಬ ಸಾವಿನ ಮನೆಯ ಕದ ತಟ್ಟುತ್ತಿದ್ದಾನೆ ಎಂದು ಗೊತ್ತಾದರೆ, ಆತ ಸಾಯುವ ಮೊದಲು ಸಮಾನಮನಸ್ಕರ ಮುಂದೆ ನಿಂತು ಮಾತನಾಡುವ ಅಥವಾ ಅವರೊಂದಿಗೆ ಬದುಕುವ ಅವಕಾಶವನ್ನು ಅಮೆರಿಕದಲ್ಲಿ ಮಾಡಿಕೊಡಲಾಗುತ್ತದೆ. ರ್ಯಾಂಡಿ ಪಾಶ್ ನೀಡಿದ ಉಪನ್ಯಾಸದ ಭಾವಾನುವಾದವೇ ಈ ಪುಸ್ತಕ...
ಭಾರತದಲ್ಲಿಯೂ ಸಮೀಪದ ಪೌರ್ವಾತ್ಯ ದೇಶಗಳಲ್ಲಿಯೂ ದೀರ್ಘಕಾಲದಿಂದ ಹರಿದು ಬಂದಿರುವ ವಿವಿಧ ರೀತಿಯ ಆಧ್ಯಾತ್ಮಿಕ ಧ್ಯೇಯ ಮತ್ತು ಸಾಧನೆಗಳನ್ನು ಕುರಿತು, ಸ್ವಾಮಿರಾಮರು ಬಹಳ ತಿಳಿಯಾಗಿ, ಜ್ಞಾನ ಕುತೂಹಲಿಗಳ ಮುಂದೆ ಇರಿಸುವ ಪ್ರಯತ್ನವನ್ನು ಮಾಡಿದ್ದಾರೆ. ಅದರಲ್ಲಿ ಬುದ್ಧಿ ಚಮತ್ಕಾರದ ಯಾವ ಪ್ರದರ್ಶನವೂ ಇಲ್ಲ. ಅವರ ಪ್ರಾಮಾಣಿಕ ಅನುಭವ ಮತ್ತು ವಿವೇಚನೆಗಳಷ್ಟೇ ಕಾಣುತ್ತವೆ. ಹೀಗಾಗಿ ನಮ್ಮ ನಾಡಿನ ಸಂಸ್ಕೃತಿಯಲ್ಲಿ ಈತನಕ ಹರಿದು ಬಂದ ನಮ್ಮಲ್ಲಿನ ಅನೇಕ ಹಿರಿಯರು ತಮ್ಮ ಯಾವತ್ತು ಬದುಕನ್ನು ಅರ್ಪಿಸಿ ಜೀವಿಸಿದಂಥ ಕ್ಷೇತ್ರ ಯಾವ ತೆರನವು - ಎಂಬುದನ್ನು ಬಹಳ ಚೆನ್ನಾಗಿ ಈ ಗ್ರಂಥದಲ್ಲಿ ಬಣ್ಣಿಸಿದ್ದಾರೆ...